ಮಂಗನಿಂದ ಮಾನವನಾದ, ಎಂಬ ವಾದವನ್ನು ಪ್ರಾಕೈತಿಹಾಸಿಕ ಹಿನ್ನೆಲೆಯಿಂದ ಅರಿಯುತ್ತೇವೆ. ಮನುಷ್ಯರಂತೆ ಸೂಕ್ಷ್ಮಮತಿಯಾದ, ಈಗಾಗಲೇ ಮನುಷ್ಯರ ಕೆಲಸಗಳನ್ನು ನಿಭಾಯಿಸುತ್ತಿರುವ ಚಿಂಪಾಂಜಿಯು ಮಾನವನ ಗುಣಗಳಿಗೆ ಹತ್ತಿರವಾಗಿದೆ. ಇದನ್ನು ನೋಡಿದ ವಿಜ್ಞಾನಿಗಳು ಚಿಂಪಾಂಜಿಯನ್ನು ಮಾನವನನ್ನಾಗಿ ಪರಿವರ್ತಿಸಬಾರದೇಕೆ? ಎಂಬ ಶೋಧನೆಯನ್ನು ನಡೆಸಿದ್ದಾರೆ. ಚಿಂಪಾಂಜಿಯಲ್ಲಿ ಇರದ ಮನುಷ್ಯರಲ್ಲಿ ಇರುವ ವಂಶವಾಹಿನಿಗಳಿಂದ ಶೋಧನೆ ನಡೆದಿದೆ. ಈ ಎರಡೂ ಜೀವಿಗಳಲ್ಲಿರುವ DNA ಸರಿಸುಮಾರು ಶೇ. ೯೮- ೪ ಒಂದೇ ಆಗಿರುತ್ತದೆ. ಅಂದರೆ ಮನುಷ್ಯ ಚಿಂಪಾಂಜಿಯ ನಡುವಿನ ಅಂತರಕ್ಕೆ ಕಾರಣ ಕೇವಲ ಶೇ. ೧೬ ವಂಶವಾಹಿನಿಗಳು ಅಂದರೆ ೫೦ ವಂಶವಾಹಿನಿಗಳು ಮಾತ್ರ ವ್ಯತ್ಯಾಸದಲ್ಲಿದೆ. ಈ ೫೦ ರಲ್ಲಿ ಮಾತ್ರ ಮಾನವತೆಯ ಗುಟ್ಟು ಅಡಗಿದೆ. ಈ ೫೦ ವಂಶವಾಹಿನಿಯನ್ನು ಗುರುತಿಸಿ ಅವುಗಳ ಆಮೂಲಾಗ್ರ ಕಾರ್ಯವೈಖರಿಯನ್ನು ಅರಿಯಬೇಕಿದೆ. ಈ ೫೦ ನ್ನು ಬೇರ್ಪಡಿಸಿ ಚಿಂಪಾಂಜಿಯ ಕ್ರೋಮೋ ಸೋಮುಗಳಲ್ಲಿ ‘ಹೊಲಿದು’ ಬಿಟ್ಟರೆ ಇವುಗಳನ್ನು ಮನುಷ್ಯರನ್ನಾಗಿ ಪರಿವರ್ತಿಸಬಹುದೆಂದು ವಿಜ್ಞಾನಿಗಳ ಲೆಕ್ಕಚಾರವಾಗಿದೆ. ಎಂದಾದರೊಂದು ದಿನ ಈ ಮನುಷ್ಯರ ಕೆಲವು ನಡುವಳಿಕೆಯನ್ನು ಹೊಂದಿದ ಚಿಂಪಾಂಜಿ ಮನುಷ್ಯನಾಗಬಹುದೆಂದರೆ ನಂಬಲು ಅಸಾಧ್ಯವೆ? ವೈಜ್ಞಾನಿಕವಾಗಿ ಅಸಾಧ್ಯವೆಲ್ಲ ಸಾಧ್ಯವಾಗುತ್ತಲೇ ಇದೆಯಲ್ಲ.
*****
Related Post
ಸಣ್ಣ ಕತೆ
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ನಾಗನ ವರಿಸಿದ ಬಿಂಬಾಲಿ…
ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ಕತೆಗಾಗಿ ಜತೆ
ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…